vidyakashidharwad@gmail.com 9611904354, 9611789853, 9611519475

We Are The Best Coaching Centre Ever!!

We are reviewed as one of the best coaching centers in Dharwad  for the preparation for competitive examinations. We provide aspirants with a personalized, tailored, and consistent development program that will bring out the best in them. The courses offered are KAS, PSI,PDO, FDA, SDA, KPTCL,SSC, RRB, BANKING,KPSC, GROUP-C,PC, TET,FOREST GUARD, and more in English and Kannada language. In addition, We will also provide test series, crash courses, and monthly current affairs magazines.


Our Team

ಮಲ್ಲಿಕಾರ್ಜುನಗೌಡ ಪೋಲಿಸ್‌ಪಾಟೀಲ, ನಿರ್ದೇಶಕರು

ನಿಮ್ಮಲ್ಲೂ ಆಗಾಧ ಸಾಮಥ್ರ್ಯವಿದೆ. ಅದ್ಭುತವಾದುದ್ದನ್ನು ಸಾಧಿಸಬಹುದು. ನೀವೂ ಪ್ರತಿದಿನವೂ ಅಧ್ಯಯನಶೀಲರಾಗಿರಬೇಕು. ನಾವೂ ಅತಿದೊಡ್ಡ ಸವಾಲನ್ನು ಸ್ವೀಕರಿಸಿದಾಗ ಮಾತ್ರ ನಮ್ಮ ಸಾಮಥ್ರ್ಯವನ್ನು ಸಮರ್ಥವಾಗಿ ಬಳಸಲು ಸಾಧ್ಯ. ಸಾಕು ಎಂದರೆ ಸ್ಥಗಿತ, ಬೇಕು ಎಂದರೆ ಬೆಳವಣಿಗೆ. ಸತತ ಪ್ರಯತ್ನ ಪರಿಶ್ರಮದಿಂದ ಮುನ್ನಡೆದರೆ ಇತಿಹಾಸವನ್ನು ಸ್ಟಷ್ಟಿಸಬಹುದು. ನಾವು ಯಾವದೇ ಕಾರ್ಯವನ್ನು ಆಶಾಭಾವದಿಂದ ಕೈಗೊಂಡರೆ ಪವಾಡಗಳನ್ನೇ ಸೃಷ್ಟಿಸಬಹುದು ಅಂಧ ವ್ಯಕ್ತಿಗಳೂ ಕೂಡಾ ಆತ್ಮ ವಿಶ್ವಾಸದಿಂದ ಮುನ್ನಡೆದು ಇತಿಹಾಸ ಸೃಷ್ಟಿಸಿದ್ದಾರೆ. ವಿದ್ಯಾಕಾಶಿ ಸಂಸ್ಥೆಯು KAS ಮತ್ತು PSI ಪ್ರತಿಭೆಗಳ ಕನಸನ್ನು ನನಸಾಗಿಸಲೂ ಸದಾ ಸಾಕಾರಗೊಳಿಸುತ್ತದೆ. ನಮ್ಮ ಸಂಸ್ಥೆಯು ಉನ್ನತ ಅಧಿಕಾರಿಗಳು ಮತ್ತು ಉಪನ್ಯಾಸವೃಂದದಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ನೀಡುವಲ್ಲಿ ಸದಾ ಹಗಲಿರುಳು ಶ್ರಮಿಸುತ್ತಿದೆ.

ಗಡ್ಡೆಪ್ಪ. ಎಮ್. ಗುಂಜಟಗಿ, ಮಾರ್ಗದರ್ಶಕರು

“ದೊಡ್ಡ ಗುರಿಯನ್ನು ಹೊಂದಿ, ನಿನ್ನಲ್ಲಿ ನೀನು ನಂಬಿಕೆ ಇಟ್ಟು ಅದನ್ನು ಪಡೆಯುವ ಹಾಗೆ ಪರಿಶ್ರಮ ಪಟ್ಟರೇ ಎಲ್ಲವೂ ಸಾಧ್ಯ” ಹೌದು ಇದು ಸತ್ಯದ ಮಾತು, ಸ್ಪರ್ಧಾ ಜಗತ್ತಿನಲ್ಲಿ ಸಾಧನೆಯ ಶಿಖರವನ್ನೇರಬೇಕಾದರೆ ಮೊದಲಿಗೆ ಬೇಕಾದುದು ನಮ್ಮಲ್ಲಿ ನಮ್ಮ ಮೇಲಿನ ಆತ್ಮವಿಶ್ವಾಸ ಇದರ ಜೊತೆಗೆ ಸಣ್ಣ ಸಣ್ಣ ಪ್ರಯತ್ನಗಳ ಮೆಟ್ಟಿಲುಗಳ ಮೇಲೆ ಏರಿದರೆ ಅಂದುಕೊಂಡ ಗುರಿಯನ್ನು ಮುಟ್ಟುತ್ತೇವೆ. ತನ್ನನ್ನು ತಾನು ಹೋಲಿಸಿಕೊಳ್ಳದೆ ನಡೆದರೆ ಸಾಕು ಸ್ಪರ್ಧಾರ್ಥಿಗಳ ಸ್ಪರ್ಧಾಯುಗದಲ್ಲಿ ಗೆಲವು ಅತಿ ಕಡಿಮೆ ಅವಧಿಯಲ್ಲಿ ದೊರೆಯಬೇಕಾದರೆ ಸರಿಯಾದ ಮಾರ್ಗದರ್ಶನ ಅವಶ್ಯಕತೆ ಇದೆ. ಅಂತಹ ಮಾರ್ಗದರ್ಶನವನ್ನು ನಮ್ಮ ವಿದ್ಯಾಕಾಶಿ ಸಂಸ್ಥೆ ನುರಿತ ಉಪನ್ಯಾಸಕರಿಂದ ನೀಡುತ್ತಿದೆ. ನಮ್ಮ ಸಂಸ್ಥೆ ಗುರಿಯ ಕನಸು ಹೊತ್ತು ಬರುವ ಸ್ಪರ್ಧಾರ್ಥಿಗಳಿಗೆ ಗುರಿಯನ್ನು ತಲಪುವರೆಗೂ ಸದಾ ಬೆನ್ನೆಲುಬಾಗಿ ನಿಲ್ಲುವುದು. ಈ ವಿದ್ಯಾಕಾಶಿ ಸಂಸ್ಥೆಯಲ್ಲಿ ಓದಿದ ಪ್ರತಿಯೊಬ್ಬ ಅಭ್ಯರ್ಥಿಯು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

ಬಸವರಾಜ ತಲ್ಲೂರು, ಮಾರ್ಗದರ್ಶಕರು

ಬದುಕಿನಲ್ಲಿ ಗೆಲುವನ್ನು ಹೊಂದಬೇಕಾದರೆ ಪ್ರತಿಯೊಬ್ಬರಿಗೂ ಗುರುವಿನ ಅವಶ್ಯಕತೆಯಿದೆ. ಧಾರವಾಡದ “ವಿದ್ಯಾಕಾಶಿ ಕರಿಯರ್ ಅಕಾಡೆಮಿ” ನಿಮಗೆ ಒಬ್ಬ ಸರಿಯಾದ ಗುರುವಾಗಿದ್ದು, ನಿಮ್ಮ ಗೆಲುವಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತದೆ. ಯಶಸ್ಸಿಗೆ ಒಂದೇ ಒಂದು ಮಂತ್ರ - ಅದುವೇ ಕಠಿಣ ಪರಿಶ್ರಮ. ಅಡ್ಡದಾರಿ ಹಿಡಿಯದೇ Shortcut ಮಾರ್ಗ ಹುಡುಕದೇ, ನೇರದಾರಿಯಲ್ಲಿ ಸಾಗಿ ಯಶಸ್ಸು ಪಡೆಯೋಣ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ತೆಗೆದುಕೊಂಡು ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಿರಿ.

Our Team


ಮಲ್ಲಿಕಾರ್ಜುನಗೌಡ ಪೋಲಿಸ್‌ಪಾಟೀಲ

ನಿರ್ದೇಶಕರು

ಗಡ್ಡೆಪ್ಪ. ಎಮ್. ಗುಂಜಟಗಿ

ಮಾರ್ಗದರ್ಶಕರು

ಬಸವರಾಜ ತಲ್ಲೂರು

ಮಾರ್ಗದರ್ಶಕರು